Shrirasthu Shubhamasthu: ಕುತಂತ್ರಿ ಶಾರ್ವರಿಗೆ ಬುದ್ದಿ ಕಲಿಸುತ್ತಿರುವ ಮಹೇಶ; ಆಕೆಯ ಮುಂದಿನ ನಡೆ ಏನು?

Arun Kumar
0

ಮಹೇಶ ಮನೆಯವರ ಬಳಿ ಎಲ್ಲಿ ನಿಜ ವಿಚಾರವನ್ನು ಹೇಳಿ ಬಿಡುತ್ತಾನೋ ಎನ್ನುವ ಭಯದಲ್ಲಿಯೇ ಶಾರ್ವರಿ ಕಾಲ ಕಳೆಯುತ್ತಿದ್ದಾಳೆ. ಮಾಧವನ ಕುಟುಂಬವನ್ನು ಹೇಗಾದರೂ ಮಾಡಿ ಮುಗಿಸಿ ಬಿಡಬೇಕು ಎನ್ನುವ ಆಲೋಚನೆಯಲ್ಲಿ ಆಕೆ ಇರುತ್ತಾಳೆ. ತನ್ನ ಗಂಡ ಎಲ್ಲರ ಮುಂದೆ ಬಾಯಿ ಬಿಟ್ಟರೆ ನನ್ನ ಗತಿ ಏನು ಎನ್ನುವ ಆತಂಕ. ಮಹೇಶ ಬಹಳ ಚೆನ್ನಾಗಿಯೇ ಆಟ ಆಡಲು ಶುರು ಮಾಡಿ ಇರುತ್ತಾನೆ.

ಮಹೇಶನನ್ನು ಹೇಗಾದರೂ ಮಾಡಿ ಬಗ್ಗು ಬಡಿಯಬೇಕು ಎಂದು ಆಲೋಚನೆ ಮಾಡುತ್ತಿದ್ದ ಶಾರ್ವರಿಗೆ ಬಿಗ್ ಶಾಕ್ ಮೇಲೆ ಶಾಕ್ ನೀಡಿದ್ದಾನೆ ಮಹೇಶ. ಇತ್ತೀಚಿನ ದಿನಗಳಲ್ಲಿ ಅಭಿ ಹಾಗೂ ಅವಿಯ ಜಗಳ ಮಾತ್ರ ತಾರಕಕ್ಕೆ ಏರಿದೆ. ಹೇಗಾದರೂ ಮಾಡಿ ಅಭಿಗೆ ಎಲ್ಲಾ ಅರ್ಥ ಆಗುವ ಹಾಗೆ ಮಾಡಬೇಕು ಎಂದು ಅವಿನಾಶ್ ಹೇಳುತ್ತಾನೆ . ಅಭಿ, ತುಳಸಿ ಅಮ್ಮ ಮಾಡಿದ ಸಹಾಯವನ್ನು ಮರೆಯುತ್ತಿದ್ದಾನೆ. ಹಾಗೆಯೇ ಅದೆಷ್ಟೋ ಬಾರಿ ತುಳಸಿ ಅಮ್ಮ ಒಳ್ಳೆಯ ಕಾರಣಕ್ಕೆ ಹೇಳಿದ್ದರೂ ಆಕೆಯನ್ನು ಕೆಟ್ಟವರ ಹಾಗೆ ಬಿಂಬಿಸುತ್ತಾರೆ.

ತುಳಸಿ ಮಾತು ಕೇಳಲು ಕೂಡ ತಯಾರಿಲ್ಲ ಎಂದು ಅವಿ ಪೂರ್ಣಿಮಾ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ . ಅವಿಗೆ ತನ್ನ ತಮ್ಮ ಎಂದರೆ ಜೀವ. ಆದರೆ ತಮ್ಮ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವುದನ್ನು ನೋಡಿ ಬಹಳ ಆತಂಕ ಪಟ್ಟುಕೊಳ್ಳುತ್ತಾನೆ. ಹಾಗೆಯೇ ಆತನಿಗೆ ಬಹಳ ನೋವು ಪಡುತ್ತಿದ್ದಾನೆ. ಆದರೂ ಆತನಿಗೆ ತಾನು ಕೈ ಮಾಡಿ ಬಿಟ್ಟೆನಲ್ವಾ ಎನ್ನುವ ಬೇಸರ ಇರುತ್ತದೆ.

ಎಲ್ಲರ ಮುಂದು ತನ್ನ ತಮ್ಮನ ಮೇಲೆ ಕೈ ಮಾಡಲು ಮುಂದಾಗಿದ್ದು ತಪ್ಪೇ. ಅವನು ಮಾಡಿದ್ದು ಸರಿಯಲ್ಲ. ಆದರೂ ನಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಎಂದು ಬಹಳ ಬೇಸರದಿಂದ ಹೇಳುತ್ತಾನೆ.

ದೀಪಿಕಾ ಹೊಸ ಪ್ಲ್ಯಾನ್
ಅಭಿ ಮನಸನ್ನು ಅವಿ ವಿರುದ್ದ ಎತ್ತಿ ಕಟ್ಟುವ ಪ್ರಯತ್ನವನ್ನು ದೀಪಿಕಾ ಹಾಗೂ ಶಾರ್ವರಿ ಮಾಡುತ್ತಿರುತ್ತಾರೆ. ಆದರೆ ಅಭಿ ಮಾತ್ರ ನನ್ನ ಬಳಿ ಬಂದು ಸಾರಿ ಕೇಳಿಯೇ ಕೇಳುತ್ತಾನೆ ಎನ್ನುವ ಭರವಸೆಯಲ್ಲಿ ಇರುತ್ತಾನೆ. ಅಭಿಗೆ ತನ್ನ ಅಣ್ಣ ಯಾವತ್ತೂ ಸರಿಯಲ್ಲ, ಅಣ್ಣ ಅತ್ತಿಗೆ ಹೇಳಿದ ಹಾಗೆ ಕೇಳುತ್ತಾನೆ ಎನ್ನುವ ರೀತಿ ಅಭಿಯ ಬಳಿ ಕಿವಿ ಚುಚ್ಚುತ್ತಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)