RCB VS CSK: ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಲು ಚೆನ್ನೈ ವಿರುದ್ಧ 18 ರನ್ ಅಂತರದಲ್ಲಿ ಗೆಲ್ಲಲೇಬೇಕು!

Arun Kumar
0

RCB ತಂಡದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು, ಇಂದು ಚೆನ್ನೈ ವಿರುದ್ಧದ ಪಂದ್ಯದ ನಡುವೆ ಶುರುವಾದ ಭರ್ಜರಿ ಮಳೆ ದಿಢೀರ್ ನಿಂತು ಹೋಗಿದೆ. ಹೀಗಾಗಿ ಪಂದ್ಯ ಯಾವುದೇ ಓವರ್ ಬದಲಾವಣೆ ಇಲ್ಲದೆ ಮತ್ತೆ ಆರಂಭ ಆಗಿದ್ದು, ಆರ್ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲು ಹೇಗೆ ಗೆಲ್ಲಬೇಕಿದೆ ಗೊತ್ತಾ? ಬನ್ನಿ ತಿಳಿಯೋಣ.

ಆರ್ಸಿಬಿ ತಂಡ 13 ಪಂದ್ಯ ಆಡಿದ್ದು, 6 ಪಂದ್ಯದಲ್ಲಿ ಗೆದ್ದು 7 ಪಂದ್ಯ ಸೋತಿದೆ. ಆದರೆ ಮುಂದಿನ ಹಂತಕ್ಕೆ ಹೋಗಲು ಆರ್ಸಿಬಿ ಬೆಂಗಳೂರು ತಂಡ ಇಂದಿನ ಮ್ಯಾಚ್ ಗೆಲ್ಲಲೇಬೇಕಿದೆ. ಇಲ್ಲವಾದರೆ ಈ ಸ್ಥಿತಿಯಲ್ಲಿ ಆರ್ಸಿಬಿ ತಂಡಕ್ಕೆ ಅವಕಾಶ ಮಿಸ್ ಆಗಲಿದ್ದು, ಚೆನ್ನೈ ತಂಡವೇ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆರ್ಸಿಬಿ ಅಭಿಮಾನಿಗಳು ಮಳೆ ನಿಲ್ಲಲಿ ದೇವರೆ ಅಂತಾ ಬೇಡಿಕೊಳ್ಳುತ್ತಿದ್ದಾರೆ. ಚೆನ್ನೈ ತಂಡಕ್ಕೆ, ಮಳೆ ಬಂದರು ಕೂಡ ಮತ್ತೆ ಪ್ಲಸ್ ಪಾಯಿಂಟ್ ಆಗಲಿದೆ. ಯಾಕಂದ್ರೆ ಚೆನ್ನೈ ಈಗಾಗಲೇ 14 ಪಾಯಿಂಟ್ ಗಳಿಸಿದೆ, ಈಗ ಮಳೆ ಬಂದು ಮ್ಯಾಚ್ ನಿಂತರೆ ಚೆನ್ನೈ 15 ಪಾಯಿಂಟ್ ಗಳಿಸಲಿದೆ. ಹೀಗಾಗಿ ಆರ್ಸಿಬಿ ಈ ಪಂದ್ಯ ಅಧಿಕ ರನ್ ಅಂತರದಲ್ಲಿ ಗೆಲ್ಲಬೇಕಿದೆ.

18 ರನ್ ಅಂತರದ ಗೆಲುವು!
RCB ತಂಡ ಮುಂದಿನ ಹಂತಕ್ಕೆ ಹೋಗಲು ಇಂದು ಚೆನ್ನೈ ವಿರುದ್ಧ ಗೆದ್ದರೆ ಮಾತ್ರ ಸಾಲದು, ಇದರ ಜೊತೆಗೆ ಆರ್ಸಿಬಿ ಬೆಂಗಳೂರು ತಂಡ ಇಂದು ಭರ್ಜರಿ 18 ರನ್ ಅಂತರದ ಗೆಲುವು ಸಾಧಿಸಬೇಕಿದೆ. ಇಲ್ಲವಾದರೆ ಆರ್ಸಿಬಿ ತಂಡ ರನ್ರೇಟ್ ಲೆಕ್ಕಾಚಾರದಲ್ಲಿ ಚೆನ್ನೈ ತಂಡಕ್ಕಿಂತ ಹಿಂದೆ ಉಳಿಯಲಿದೆ. ಈ ಮೂಲಕ ಆರ್ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಿಂದಲೇ ಹೊರ ಬೀಳಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ತಲುಪಲಿದೆ. ಹೀಗಾಗಿ ಈಗ ಆರ್ಸಿಬಿ ತಂಡ ಕನಿಷ್ಠ 18 ರನ್ ಅಂತರದ ಗೆಲುವು ಸಾಧಿಸಬೇಕಿದೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)