ದೀಪಿಕಾ ಪಡುಕೋಣೆ ಜೊತೆ ಮುನಿಸು ; ಜವಾನ್ ಒಪ್ಪಿಕೊಂಡಿದ್ದೇಕೆ ನಯನತಾರಾ..?

Arun Kumar
0

ಸಾಮಾನ್ಯಕ್ಕೆ ಇಬ್ಬರು ಸ್ಟಾರ್ ಗಳು ಒಂದೇ ಚಿತ್ರಕ್ಕೆ ಬಣ್ಣ ಹಚ್ಚಿದರೆ, ನಿರ್ದೇಶಕರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತೆ. ಸ್ವಾರದ್ವಯರ ವರ್ಚಸ್ಸಿಗೆ ಅನುಗುಣವಾಗಿ, ಅವರ ಅಭಿಮಾನಿಗಳನ್ನ ಗಮನದಲ್ಲಿಟ್ಟುಕೊಂಡು ಕಥೆಯನ್ನ ಹೆಣೆಯಬೇಕಾಗುತ್ತೆ. ಇಬ್ಬರ ಪಾತ್ರಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನೂ ನೀಡಬೇಕಾಗುತ್ತೆ. ಚೂರು ಹೆಚ್ಚು ಕಡಿಮೆ ಆದರೂ.. ಇಬ್ಬರು ಸ್ಟಾರ್ ಗಳ ನಡುವಿನ ಈಗೋ ಕ್ಲ್ಯಾಶು ಆ ಸಿನಿಮಾವನ್ನೇ ಬಲಿ ಪಡೆಯುವ ಸಾಧ್ಯತೆ ಇರುತ್ತೆ. ಸಿನಿಮಾದ ನೆಪದಲ್ಲಿ ಮೂಡುವ ಬಿರುಕು ಆ ನಂತರ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇರುತ್ತೆ.

ಇನ್ನೂ ಚಿತ್ರಕ್ಕೆ ಬಣ್ಣ ಹಚ್ಚಿದ ಸ್ಟಾರ್ ಗಳ ಮನಸಿನಲ್ಲಿ ಕಲ್ಮಶ ಇರುತ್ತೋ ಇಲ್ಲವೋ. ಆದರೆ ಈ ಹಬೆಯಲ್ಲಿ ಅನೇಕರು ತಮ್ಮ ಬೆಳೆಯನ್ನ ಬೇಯಿಸಿಕೊಳ್ಳುತ್ತಾರೆ. ಇಲ್ಲ ಸಲ್ಲದ ಸುದ್ದಿಯನ್ನ ತೇಲಿ ಬಿಡುತ್ತಾರೆ. ನಯನತಾರಾ ಹಾಗೂ ದೀಪಿಕಾ ಪಡುಕೋಣೆ ವಿಚಾರದಲ್ಲಿಯೂ ಇದೇ ಆಗಿತ್ತು.

ಹೌದು, ನಿಮಗೆ ನೆನಪಿದ್ದರೆ.. ಜವಾನ್ ಚಿತ್ರ ತೆರೆಗೆ ಬಂದ ನಂತರ, ನಯನತಾರಾ-ದೀಪಿಕಾ ಪಡುಕೋಣೆಯ ನಡುವೆ ಸಂಬಂಧ ಹಳಿಸಿದೆ ಅನ್ನುವ ಮಾತು ಕೇಳಿ ಬಂದಿತ್ತು. ದೀಪಿಕಾ ಪಡುಕೋಣೆಯ ಪಾತ್ರಕ್ಕೆ ಚಿತ್ರದ ದ್ವೀತಿಯಾರ್ಧದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕಾರಣಕ್ಕೆ ನಯನತಾರಾ, ಚಿತ್ರದ ನಿರ್ದೇಶಕ ಆಟ್ಲೀ ಮೇಲೆ ಮುನಿಸಿಕೊಂಡಿದ್ದಾರೆ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ಇಷ್ಟೆಲ್ಲಾ ಆದರೂ ನಯನತಾರಾ ಮಾತನಾಡಿರಲಿಲ್ಲ. ದೀಪಿಕಾ ಪಡುಕೋಣೆ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಹರಿದಾಡಿದ ಈ ಸುದ್ದಿಯನ್ನೇ ಅನೇಕರು ನಿಜ ಎಂದುಕೊಂಡಿದ್ದರು. ಆದರೆ ವಾಸ್ತವದಲ್ಲಿ ಈ ಸುದ್ದಿ ಸುಳ್ಳು. ಖುದ್ದು ನಯನತಾರಾ ಈ ಮಾತನ್ನ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)