ಲಕ್ಷ ಲಕ್ಷ ಹಣ ದೋಚಿದ ಖದೀಮ "ವಿಕ್ಟರ್"

Arun Kumar
0

 

ನನ್ನ ಹೆಸರು ಶಂಕರ್ ಗೌಡ ನಾನು ಬಡ ಕೊಲಿ ಕಾರ್ಮಿಕ ಒಂದು ಅಪಘಾತದಿಂದ ನನಗೆ ಒಂದು ಕಾಲು ಇರುವುದಿಲ್ಲ ಪ್ಲಾಸ್ಟಿಕ್ ಕಾಲನ್ನು ಹಾಕಿಕೊಂಡಿರುತ್ತೇನೆ ಮತ್ತೊಂದು ಕಾಲಗೆ ರಾಡನ್ನು ಹಾಕಿಕೊಂಡು ಓಡಾಡಲು ಸಹ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಚನ್ನಸಂದ್ರ ಬಸ್ ಸ್ಟಾಪ್ ನಲ್ಲಿ ಬೀದಿ ಬದಿಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತೇನೆ ಹೀಗಿರಬೇಕಾದಾಗ ನನ್ನ ಮೂರು ಜನ ಮಕ್ಕಳು ಸಹ ಸ್ಕೂಲಿನ ಹೆಸರು ಇಂಫಾಟ್ಸ್ ಪ್ಯಾರಡೈಸ್ ಸ್ಕೂಲಿನ ಮಾಲೀಕ ವಿಕ್ಟರ್ M ಇವರ ಶಾಲೆಯಲ್ಲಿ ನನ್ನ ಮೂರು ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ ಜೊತೆಗೆ ಅವರ ಸ್ಕೂಲಿನ ಅಕ್ಕಪಕ್ಕದಲ್ಲಿಯೇ ನಾವು ಸುಮಾರು 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜೀವನ ಮಾಡಿಕೊಂಡು ಬಂದಿರುತ್ತೇವೆ ಒಂದು ದಿವಸ ವಿಕ್ಟರ್ ನನ್ನನ್ನು ಕರೆದು ನೀನು ರೋಡಿನಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿರುವೆ ಇಷ್ಟು ಕಷ್ಟ ಬೀಳ್ತಾ ಇದೆಯಾ ನನ್ನಿಂದ ನೋಡಲು ಆಗುವುದಿಲ್ಲ ನಿನಗೆ ಒಂದು ದುಡ್ಡು ಬರುವ ದಾರಿಯನ್ನು ಹೇಳಿಕೊಡುವೆ ಎಂದು ನನ್ನನ್ನು ನಂಬಿಸಿ ನಿಮ್ಮ ಮಕ್ಕಳಿಗೆ ಸ್ಕೂಲ್ ಫೀಸ್ ಕೂಡ ಕಟ್ಟುವುದು ಇರುವುದಿಲ್ಲ ವಿದ್ಯಾಭ್ಯಾಸ ಫ್ರೀಯಾಗಿ ಕೊಡುತ್ತೇನೆ ನಿಮಗೆ ಜೊತೆಗೆ ತಿಂಗಳಿಗೆ 15000 ಸಾವಿರ ಮಟ್ಟಿಗೆ ಆದಾಯ ಮಾಡಿಕೊಡುವಂತಹ ಒಂದು ದಾರಿ ಅದು ಹೇಗೆ ಎಂದರೆ ಒಂದು ಲಕ್ಷಕ್ಕೆ 15000 ನಾನು ತಿಂಗಳಿಗೆ ನಿಮಗೆ ಬರುವ ಹಾಗೆ ಮಾಡಿಕೊಡುತ್ತೇನೆಂದು ನನಗೆ ನಂಬಿಕೆ ಬರುವ ಹಾಗೆ ಮಾತನಾಡಿ ನನ್ನನ್ನು ನಂಬಿಸಿ ನನ್ನತ್ರ ಇಂದ ಮೊದಲೇ ತಿಂಗಳು ಒಂದು ಲಕ್ಷ ರೂ. ಗಳನ್ನು ತೆಗೆದುಕೊಂಡಿರುತ್ತಾನೆ ಆ ತಿಂಗಳು ನನ್ನ ಖಾತೆಗೆ 15000 ಹಾಕಿರುತ್ತಾರೆ ಆಗ ನನ್ನ ಕಷ್ಟಕ್ಕೆ ಇವರ ಹಾಗಿದ್ದಾರೆ ಎಂದು ತಿಳಿದು ಸಂಪೂರ್ಣವಾಗಿ ವಿಕ್ಟರ್ ಅವರನ್ನು ನಂಬಿರುತ್ತೇನೆ ತದನಂತರ ಎರಡನೇ ತಿಂಗಳಿಗೇ ಬಿಟ್ಟದವರು ಇನ್ನು 10 ಜನರನ್ನು ಸೇರಿಸಿಕೋ, ಇನ್ನು ಹೆಚ್ಚು ಆದಾಯ ಮಾಡಿಕೊಡುತ್ತೇನೆ ಎಂದು ಹೇಳಿ ನನಗೆ ನಂಬಿಕೆ ಕೊಟ್ಟರು ಆಗ ನಾನು ನನ್ನ ಹೆಂಡತಿಯ ಹೆಸರಿನಲ್ಲಿ ನಮ್ಮ ತಾಯಿ,ಹೆಸರಲ್ಲಿ ನನ್ನ ಭಾವ, ಕೈಯಲ್ಲಿಕ್ಕೆ ನನ್ನ ಮೂರು ಮಕ್ಕಳ ಹೆಸರಿನ ಮೇಲೆ ನಾವು 700000 ಕೊಟ್ಟಿರುತ್ತೇನೆ ತದನಂತರ ಒಂದು ತಿಂಗಳು ಕಳೆದ ಮೇಲೆ ಯಾವುದೇ ಹಣ ಬರದಿದ್ದಾಗ ವಿಕ್ಟರ್ ಬಳಿ ಕೇಳಿದಾಗ ಕಾಯಿರಿ ಬರುತ್ತದೆ ಎಂದು ನಂಬಿಸಿದ್ದರು ಆರು ತಿಂಗಳು ಆದರೂ ಯಾವುದೇ ದುಡ್ಡು ಬರೆದಿದ್ದಾಗ ನಾನು ಅವರ ಸ್ಕೂಲಿನತ್ರ ಅವರ ಮನೆಗೆ ಕೇಳಲು ಹೋದಾಗ ನನ್ನನ್ನು ಹಿಡಿದು ಎಳೆದುಕೊಂಡು ಒಡೆದು ಬಡೆದು ನನ್ನನ್ನು ಗೇಟಿನ ಹೊರಗಡೆ ನಾನೊಬ್ಬ ಅಂಗವಿಕಲನು ಅಂತ ಸಹ ನೋಡದೆ ಮಾನವೀಯತೆ ಇಲ್ಲದೆ ತಳ್ಳಿದರು ಆತನು ಮತ್ತು ಆತನ ಕುಟುಂಬಸ್ಥರು ಹೀಗಿರಬೇಕಾದ ಪರಿಸ್ಥಿತಿಯಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳು ವಿಟ್ಟರ್ ಬಳಿ ದುಡ್ಡನ್ನು ಕೇಳಲು ಹೋದಾಗ ಅವರನ್ನು ಸಹ ಅವಾಚ ಶಬ್ದಗಳಿಂದ ನಿಂದಿಸಿ ನಿಮಗೂ ನಿಮ್ಮ ಮಕ್ಕಳನ್ನು ಇಲ್ಲೇ ಒಡೆದು ಸಾಯಿಸಿ ಇಲ್ಲೇ ಉತ್ ಹಾಕ್ತೀನಿ ಎಂದು ಹೇಳಿ ಪ್ರಾಣ ಬೆದರಿಕೆ ಹಾಕಿರುತ್ತಾನೆ ಮತ್ತು ರೌಡಿಗಳನ್ನು ಬಿಟ್ಟು ನಿಮ್ಮನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುತ್ತಾನೆ ಕೂಲಿ ಮಾಡುವ ನಾಯಿಗಳು ನಿಮ್ಮನ್ನು ಊರಿನಿಂದನೆ ಓಡಿಸುತ್ತೇನೆ ಹೋಗಿ ಏನು ಕಿತ್ಕೊಂತಿರೋ ಕಿತ್ಕೊಳಿ ಯಾರಿಗೆ ಹೇಳ್ತಿರೋ ಹೇಳ್ಕೊಳ್ಳಿ ಎಂದು ರಸ್ತೆಗಳಲ್ಲಿ ಅವಮಾನ ಮಾಡಿರುತ್ತಾನೆ ಇದರಿಂದ ನಾವು ಎಷ್ಟೋ ಬಾರಿ ಮನನೊಂದು ಆತ್ಮಹತ್ಯೆಗೂ ಪ್ರಯತ್ನ ಪಡುವ ಹಾಗೆ ನಮಗೆ ಅವಮಾನ ಮಾಡಿರುತ್ತಾನೆ ಹೇಗಿದ್ದರೂ ನಾವು ಸಾಯುವುದು ಖಚಿತ ಆದರೆ ಒಂದು ಬಾರಿ ಪ್ರಯತ್ನ ಪಡೋಣ ಎಂದು ನಮ್ಮ ಅಕ್ಕಪಕ್ಕದವರ ಮನೆಯವರ ಜೊತೆಗೆ ಕರೆದುಕೊಂಡು ನಮ್ಮ ದುಡ್ಡು ವಾಪಸ್ ಕೇಳಲು ಹೋದಾಗ ವಿಕ್ಟರ್ ಮತ್ತು ಆತನ ಕುಟುಂಬಸ್ಥರು ವಿನೋದ್ ಜೋಸೆಫ್ ಇವರುಗಳು ನಮ್ಮನ್ನು ಸೇರಿಸಿ 49 ಜನ ಇದೇ ರೀತಿ ಮೋಸ ಮಾಡಿದ್ದರಿಂದ ತಿಳಿಯಿತು ಜೊತೆಗೆ ಶಾಲೆಯಲ್ಲಿ ಓದುವ ಮಕ್ಕಳ ತಂದೆ ತಾಯಿಯರು, ಅವಿವಿದ್ಯವಂತರು, ಬಡವರು ಕೂಲಿ ಕಾರ್ಮಿಕರು ಎಂದು ತಿಳಿದು ಈ ರೀತಿ ನಮಗೆ ಮೋಸ ಮಾಡಿರುತ್ತಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)