Darshan Thoogudeepa: ಪವಿತ್ರಾ ಗೌಡ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿಸಲು ಪ್ಲಾನ್?

Arun Kumar
0


ದರ್ಶನ್ ತೂಗುದೀಪ್ ಆರೋಗ್ಯ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಈ ಸ್ಟಾರ್ ನಟನಿಗೆ ಕೋಟಿ ಕೋಟಿ ಅಭಿಮಾನಿ ಬಳಗ ಇದ್ದರೂ, ಇದೀಗ ಜೈಲಿನ ಒಳಗೆ ತುತ್ತು ಅನ್ನ ತಿನ್ನಲು ಪರದಾಡುವ ಸ್ಥಿತಿ ಇದೆ. ಹೀಗಿದ್ದಾಗಲೇ ಬಳ್ಳಾರಿ ಜೈಲಿನಲ್ಲಿ ಊಟ ರುಚಿಸದೆ, ಸೊಳ್ಳೆಗಳ ಕಾಟಕ್ಕೆ ನಿದ್ದೆ ಬಾರದೆ, ಇಂಡಿಯನ್ ಟಾಯ್ಲೆಟ್ ಮೇಲೆ ಕೂರಲು ಆಗದೆ, ಗಬ್ಬು ವಾಸನೆ ಮಧ್ಯೆ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಪರದಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದರ್ಶನ್ ತೂಗುದೀಪ್ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಸಿಗರೇಟ್ & ಟೀ ಅಂತಾ ಎಂಜಾಯ್ ಮಾಡುತ್ತಿದ್ದರು. ಹಾಗೇ ಪ್ರತಿದಿನ ದರ್ಶನ್ ತೂಗುದೀಪ್ & ಗ್ಯಾಂಗ್ ಬಿರಿಯಾನಿ ತಿಂದು ತೇಗುತ್ತಿತ್ತು ಅಂತಾ ದರ್ಶನ್ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಈ ಸಮಯದಲ್ಲೇ, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ದರ್ಶನ್ ತೂಗುದೀಪ್ & ದರ್ಶನ್ ಆಪ್ತ ಸಹಾಯಕ ಟೇಬಲ್ ಹಾಕಿಕೊಂಡು ಚೇರ್ ಮೇಲೆ ಕುಳಿತು ಸಿಗರೇಟ್ ಸೇದುತ್ತಾ ಮಜಾ ಮಾಡಿದ್ದರು. ಈ ಫೋಟೋ ವೈರಲ್ ಆಗಿದ್ದೇ ತಡ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಅಲ್ಲದೆ ಪರಪ್ಪನ ಅಗ್ರಹಾರದಲ್ಲಿ ಹಾಯಾಗಿ ಇದ್ದ ದರ್ಶನ್ ತೂಗುದೀಪ್ ಈಗ ನಿದ್ದೆ ಇಲ್ಲದೆ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ.

ಪವಿತ್ರಾ ಗೌಡ & ದರ್ಶನ್ಗೆ ಬೇಸರ!
ದರ್ಶನ್ ತೂಗುದೀಪ್ ಇವತ್ತು ಈ ಪರಿಸ್ಥಿತಿಗೆ ಬಂದು ಜೈಲಿಗೆ ಸೇರಲು ಪವಿತ್ರಾ ಗೌಡ ಕಾರಣ, ಎಂಬುದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾಡುತ್ತಿರುವ ಗಂಭೀರ ಆರೋಪ. ಹೀಗಿದ್ದಾಗ ಪವಿತ್ರಾ ಗೌಡ ಕೂಡ ಇಲ್ಲದೆ 'ಡಿ-ಬಾಸ್' ಕುಗ್ಗಿ ಹೋಗಿದ್ದು ಪವಿತ್ರಾ ಗೌಡ ಬಳ್ಳಾರಿ ಜೈಲಿಗೆ ಶೀಘ್ರದಲ್ಲೇ ಶಿಫ್ಟ್ ಮಾಡಲು ಸಿದ್ಧತೆ ಸಾಗಿದೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಈ ಇಬ್ಬರೂ ಅಂದ್ರೆ, ದರ್ಶನ್ ತೂಗುದೀಪ್ & ಪವಿತ್ರಾ ಗೌಡ ತುಂಬಾ ಆತ್ಮೀಯ ಸ್ನೇಹಿತರು.

ಅದರಲ್ಲೂ ಕಳೆದ 10 ವರ್ಷಗಳಿಂದ ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುವುದೇ ಇಲ್ಲವೇನೋ ಎನ್ನುವಷ್ಟು ಆತ್ಮೀಯ ಸ್ನೇಹ ಇಟ್ಟುಕೊಂಡಿದ್ದರು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಬೇರೆ ಬೇರೆ ಆಗಿದ್ದು, ಒದ್ದಾಡುತ್ತಿದ್ದಾರೆ ಅಂತಾ ಸೋಷಿಯಲ್ ಮೀಡಿಯಾ ತುಂಬಾ ಜನ ಮಾತನಾಡುತ್ತಿದ್ದಾರೆ. ಹಾಗೇ ಪವಿತ್ರಾ ಗೌಡರನ್ನ ಶೀಘ್ರದಲ್ಲೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿಸಲು ತಯಾರಿ ನಡೆದಿದೆ ಎಂಬ ಸುದ್ದಿ ಹಬ್ಬಿದೆ!

'ಶೆಡ್' ಗ್ಯಾರಂಟಿ ಅಂತಾ ಎಚ್ಚರಿಕೆ!
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ತೀವ್ರ ರೀತಿಯಲ್ಲಿ ಹಲ್ಲೆ ಮಾಡಿ, ಎತ್ತಿ ಎತ್ತಿ ಬಿಸಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಸಿಗರೇಟ್ & ಇತರ ವಸ್ತುಗಳಿಂದ ಬರೆ ಹಾಕಿ, ತಲೆಯ ಮೇಲೆ ತೂತು ಮಾಡಿ, ಮರ್ಮಾಂಗಕ್ಕೆ ಜಾಡಿಸಿ ಒದ್ದು, ಕರೆಂಟ್ ಶಾಕ್ ಕೊಟ್ಟು ಕೊಲೆಯನ್ನ ಮಾಡಿದೆ ಎಂಬ ಆರೋಪ ಇದೆ. ಹೀಗಿದ್ದಾಗ ರೇಣುಕಾಸ್ವಾಮಿ ರೀತಿಯಲ್ಲೇ ಮತ್ತೊಬ್ಬ ವ್ಯಕ್ತಿ ಕೊಲೆ ಆರೋಪದ ಕಿಂಗ್ಪಿನ್ ಮತ್ತು ದರ್ಶನ್ ತೂಗುದೀಪ್ ಆಪ್ತ ಗೆಳತಿ ಪವಿತ್ರಾ ಗೌಡ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾನಂತೆ.

ತಾನು ದರ್ಶನ್ ತೂಗುದೀಪ ಅಭಿಮಾನಿ ಎಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿ, ದರ್ಶನ್ ತೂಗುದೀಪ್ ಅವರ ಬಾಳು ಹಾಳು ಮಾಡಿದ್ದು ಪವಿತ್ರಾ ಗೌಡ ಎಂದು ಆರೋಪ ಮಾಡ್ತಿದ್ದಾನೆ. ಅಲ್ಲದೆ ದರ್ಶನ್ ತೂಗುದೀಪ್ ತಕ್ಷಣ ಪವಿತ್ರಾ ಗೌಡ ಸಹವಾಸ ಬಿಡಬೇಕು ಅಂತಿದ್ದಾನೆ ಈತ. ಹೀಗಾಗಿ ಜನ ಆತನನ್ನ ಎಚ್ಚರಿಸುತ್ತಿದ್ದು, ನಿನ್ನ ಕೂಡ ರೇಣುಕಾಸ್ವಾಮಿ ಪರಿಸ್ಥಿತಿಗೆ ತರುತ್ತಾರೆ ಇದೆಲ್ಲಾ ಬೇಕಾ? ಅಂತಿದ್ದಾರೆ. ಅಲ್ಲದೆ, ಶೆಡ್ ಗ್ಯಾರಂಟಿ ಅಂತಾ ಭಯ ಹುಟ್ಟಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)