ರಾಮ ನವಮಿ: ಆದರ್ಶ ದಾಂಪತ್ಯಕ್ಕೆ ರಾಮ-ಸೀತೆಯ ಸಂಬಂಧದಿಂದ ಕಲಿಯ ಬೇಕಾದ 5 ಪಾಠಗಳು

Arun Kumar
0

ಏಕ ಪತ್ನಿ ವ್ರತಸ್ಥ ಶ್ರೀರಾಮ. ಆದ್ದರಿಂದಲೇ ಎಲ್ಲಾ ಹೆಣ್ಮಕ್ಕಳು ನನ್ನ ಪತಿ ಶ್ರೀರಾಮನಂತಿರಬೇಕು ಎಂದು ಹೇಳಲಾಗುವುದು. ರಾಮಾಯಣ ಎಂಬುವುದು ಬರೀ ಪೌರಾಣಿಕ ಕತೆಯಲ್ಲ, ಅದು ಬದುಕಿನ ಮೌಲ್ಯವನ್ನು ತಿಳಿಸುತ್ತದೆ. ಶ್ರೀರಾಮ ಹಾಗೂ ಸೀತೆ ಮಾತೆಯ ಸಂಬಂಧ ಇನ್ನೆಷ್ಟೂ ವರ್ಷಗಳು ಕಳೆದರೂ ಗಂಡ-ಹೆಂಡತಿಗೆ ಮಾದರಿಯಾಗಿರುತ್ತಾರೆ.

ದಾಂಪತ್ಯ ಜೀವನದಲ್ಲಿ ಹಲವು ತೊಂದರೆಗಳು ಬರಬಹುದು, ಅದನ್ನು ಅವರಿಬ್ಬರು ಹೇಗೆ ಎದುರಿಸಿದರು ಅದೇ ರೀತಿ ಎದುರಿಸಿದರೆ ಬದುಕು ಚೆನ್ನಾಗಿರುತ್ತದೆ. ಶ್ರೀರಾಮ -ಸೀತೆ ಜೋಡಿಯಿಂದ ಪ್ರತಿಯೊಬ್ಬ ದಂಪತಿ ಅನುಸರಿಸಬೇಕಾದ ಗುಣಗಳಿವು:

ಪ್ರೀತಿ ಮತ್ತು ಗೌರವ, ನಂಬಿಕೆ:
ಇದು ಸಂಬಂಧಕ್ಕೆ ತುಂಬಾನೇ ಮುಖ್ಯ. ಇಬ್ಬರ ನಡುವೆ ಅಗಾಧವಾದ ಪ್ರೀತಿಯಿತ್ತು, ಅಷ್ಟೇ ಗೌರವವಿತ್ತು ಹೀಗಾಗಿಯೇ ಎಂಥ ಕಷ್ಟ ಬಂದರೂ ಇಬ್ಬರು ಜೊತೆಯಲ್ಲಿದ್ದರು, ಜೊತೆಯಾಗಿ ಇರಲು ರಾವಣನ ಬಳಿ ಹೋರಾಡಿದರು. ಶ್ರೀರಾಮ ಸೀತೆಯ ಮೇಲಿಟ್ಟ ನಂಬಿಕೆಯಿಂದಲೇ ರಾವಣ ಸೀತೆಯನ್ನು ಅಪಹರಿಸಿದರೂ ಅವಳನ್ನು ಮರಳಿ ತರುತ್ತಾನೆ.

ರಾವಣ ಸೀತೆಯನ್ನು ಅಪಹರಿಸಿದಾಗ ಶ್ರೀರಾಮ ಸೀತೆಯನ್ನು ಒಂದಿಷ್ಟೂ ಸಂಶಯ ಪಡಲಿಲ್ಲ, ಈ ಗುಣ ಪ್ರತಿಯೊಬ್ಬ ಪುರುಷನಲ್ಲಿಯೂ ಇರಬೇಕು, ಹೆಂಡತಿ ಮಾಡದೇ ಇರುವ ತಪ್ಪಿಗೆ ಅವಳನ್ನು ಶಿಕ್ಷಿಸಬಾರದು. ರಾವಣ ಅಪಹರಿಸಿದಾಗ ಅದರಲ್ಲಿ ಸೀತೆಯ ತಪ್ಪಿಲ್ಲ ಎಂಬುವುದು ರಾಮನಿಗೆ ಗೊತ್ತಿತ್ತು.

ಸುಖದಲ್ಲಿ ಮಾತ್ರವಲ್ಲ ಕಷ್ಟದಲ್ಲಿಯೂ ಜೊತೆಯಾಗಿರುವುದು
ಪಿತೃವಾಖ್ಯ ಪರಿಪಾಲನೆಗಾಗಿ ಶ್ರೀರಾಮ ಕಾಡಿಗೆ ಹೊರಟು ನಿಂತಾಗ ಸೀತೆ ಬೇಕಾದರೆ ಅರಮೆನೆಯಲ್ಲಿಯೇ ಉಳಿಯಬಹುದಿತ್ತು, ಆದರೆ ಆಕೆ ಎಲ್ಲಿ ಪತಿಯಿರುತ್ತಾನೋ ಅದುವೇ ನನಗೆ ಅರಮನೆ ಎಂದು ಪತಿ ಜೊತೆ ಅರಣ್ಯವಾಸಕ್ಕೆ ಹೋಗುತ್ತಾಳೆ. ಗಂಡನ ಸುಖದಲ್ಲಿ ಮಾತ್ರವಲ್ಲ ಅವನ ಕಾಷ್ಟದಲ್ಲಿಯೂ ಜೊತೆಯಾಗಿ ನಿಲ್ಲುವುದೇ ಪತ್ನಿಯ ಧರ್ಮ ಎಂಬುವುದನ್ನು ಸೀತೆ ಮಾತೆ ತಿಳಿಸಿಕೊಡುತ್ತಾಳೆ. ಇಬ್ಬರು ಜೊತೆಗೆ ಬಾಳಲು ತೀರ್ಮಾನಿಸಿದ ಮೇಲೆ ಏನೇ ಬರಲಿ ಇಬ್ಬರು ಜೊತೆಯಾಗಿರಬೇಕು, ಅದುವೇ ಸುಂದರ ದಾಂಪತ್ಯದ ಗುಟ್ಟು.

ನಾವು ಸುಖದಲ್ಲಿದ್ದಾಗ ನಮ್ಮ ಜೊತೆ ಇರುವವರು ನಂತರ ಕಷ್ಟ ಬಂದಾಗ ನಮ್ಮನ್ನು ಬಿಟ್ಟು ಹೋಗುವವರನ್ನು ನಂಬಲೇಬಾರದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)